ರಾಯಪುರ (ಐಎಎನ್ಎಸ್): ಅಪಹೃತ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಗುರುವಾರ ಬಿಡುಗಡೆ ಮಾಡುವುದಾಗಿ ಮಾವೊವಾದಿಗಳು ಬುಧವಾರ ತಿಳಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ಕಳುಹಿಸಿರುವ ಮಾಹಿತಿಯಲ್ಲಿ ಈ ವಿಷಯ ತಿಳಿಸಿರುವ ಮಾವೊವಾದಿಗಳು, ತಾರ್ಮೆಟ್ಲಾ ಎಂಬ ಸ್ಥಳದಲ್ಲಿ ಮಧ್ಯವರ್ತಿಗಳಾದ ಜಿ.ಹರ್ಗೋಪಾಲ್ ಮತ್ತು ಬಿ.ಡಿ. ಶರ್ಮಾ ಸಮ್ಮುಖದಲ್ಲಿ ಮೆನನ್ ಅವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಸುಕ್ಮಾ ಜಿಲ್ಲೆಯ ತಾರ್ಮೆಟ್ಲಾದಲ್ಲಿ ಏಪ್ರಿಲ್ 2010ರಲ್ಲಿ ಮಾವೊವಾದಿಗಳು ಅರೆ ಸೇನಾಪಡೆಯ 76 ಯೋಧರನ್ನು ಕೊಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.