ADVERTISEMENT

‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕೆಂದು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ’

ಏಜೆನ್ಸೀಸ್
Published 3 ಅಕ್ಟೋಬರ್ 2017, 14:29 IST
Last Updated 3 ಅಕ್ಟೋಬರ್ 2017, 14:29 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ತಿರುವನಂತಪುರ: ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕು ಎಂಬುದನ್ನು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ ಎಂದು ಆಡಳಿತಾರೂಢ ಸಿಪಿಎಂ ಪಕ್ಷವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿದೆ.

ಬಿಜೆಪಿಯು ಕೇರಳದಲ್ಲಿ ಆರಂಭಿಸಿರುವ ‘ಜನ ರಕ್ಷಾ ಯಾತ್ರೆ’ಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಬುಧವಾರ ಕೇರಳಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿಪಿಎಂ, ‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕು ಎಂಬುದನ್ನು ಕೇರಳ ಸರ್ಕಾರವನ್ನು ನೋಡಿ ಕಲಿಯಲಿ. ಅದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT