ADVERTISEMENT

ಇಂದು ಗೇಟ್ಸ್- ಅಖಿಲೇಶ್ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಲಖನೌ (ಐಎಎನ್‌ಎಸ್): ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬುಧವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ರಾಜ್ಯದ ಆರೋಗ್ಯ ಕಾಳಜಿ ಕುರಿತು ಚರ್ಚಿಸಲಿದ್ದಾರೆ.

 ಆರೋಗ್ಯ ಕಾಳಜಿ ಕುರಿತು ಬಿಲ್ ಮತ್ತು ಮೆಲಿಂಡಾ ಫೌಂಡೇಶನ್ ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲು ಹಲವಾರು ಯೋಜನೆಗಳ ಬಗ್ಗೆ ಗೇಟ್ಸ್ ಚರ್ಚಿಸಲಿದ್ದಾರೆ.

ಗೇಟ್ಸ್ ಕಚೇರಿಯ ಸಿಬ್ಬಂದಿ ಕಳೆದ ವಾರ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಗೇಟ್ಸ್ ಮತ್ತು ಅಖಿಲೇಶ್ ಭೇಟಿಗೆ ಅಗತ್ಯ ತಯಾರಿ ಮಾಡಿಕೊಂಡಿವೆ.ನವಜಾತ ಶಿಶು, ಪ್ರಸೂತಿ, ಪೌಷ್ಟಿಕತೆ, ಕುಟುಂಬ ಯೋಜನೆ ಮತ್ತು ಮಕ್ಕಳ ಆರೋಗ್ಯ ಕುರಿತ ಐದು ಅಂಶಗಳ ಕಾರ್ಯಕ್ರಮಗಳನ್ನು ಗೇಟ್ಸ್ ಫೌಂಡೇಶನ್ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲು ಯೋಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.