ADVERTISEMENT

ಇಬ್ಬರ ಗಲ್ಲು ಶಿಕ್ಷೆಗೆ ‘ಸುಪ್ರೀಂ’ ತಡೆ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ದೆಹಲಿ ಸಾಮೂ ಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪ­ರಾಧಿ­ಗಳ ಗಲ್ಲು ಶಿಕ್ಷೆಗೆ ಸುಪ್ರೀಂ­ಕೋರ್ಟ್‌ ಮಾರ್ಚ್‌ 31 ರವರೆಗೆ ತಡೆ ನೀಡಿದೆ.

2012ರ ಡಿಸೆಂಬರ್‌ 16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾ­ಮೆಡಿ­ಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂ­ಹಿಕ ಅತ್ಯಾಚಾರ ಪ್ರಕರಣದಲ್ಲಿ ಮುಕೇಶ್‌ (27), ಪವನ್‌ ಗುಪ್ತಾ (20), ಅಕ್ಷಯ್‌ ಠಾಕೂರ್‌ (29) ಹಾಗೂ ವಿನಯ್‌ ಶರ್ಮಾಗೆ (21) ವಿಚಾ­ರಣಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿತ್ತು. ಎರಡು ದಿನಗಳ ಹಿಂದೆ­ಯಷ್ಟೇ ದೆಹಲಿ ಹೈಕೋರ್ಟ್‌ ಇದನ್ನು  ಎತ್ತಿಹಿಡಿದಿತ್ತು.

ಹೈಕೋರ್ಟ್‌್ ಆದೇಶವನ್ನು ಪ್ರಶ್ನಿಸಿ ಮುಖೇಶ್‌್ ಹಾಗೂ ಪವನ್‌್ ಶನಿವಾರ ಸುಪ್ರೀಂ­ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿ­ಸಿ­­ದ್ದರು. ಇದನ್ನು ಪುರಸ್ಕರಿಸಿದ ನ್ಯಾಯ­­ಮೂರ್ತಿಗಳಾದ ರಂಜನಾ ಪ್ರಕಾಶ್‌ ದೇಸಾಯಿ  ಮತ್ತು ಶಿವ ಕೀರ್ತಿ­ಸಿಂಗ್‌್ ಅವ­ರನ್ನು ಒಳಗೊಂಡ  ಪೀಠ ‘ಮುಖೇಶ್‌ ಹಾಗೂ ಪವನ್‌  ಗಲ್ಲು ಶಿಕ್ಷೆಗೆ ಮಾ.31 ರವರೆಗೆ ತಡೆ ನೀಡ­ಲಾ­ಗಿದೆ’ ಎಂದು ಹೇಳಿದೆ.

ಮುಕೇಶ್‌್ ಹಾಗೂ ಪವನ್‌್ ಪರವಾಗಿ ವಕೀಲ ಎಂ.ಎಲ್‌.ಶರ್ಮಾ ಮೇಲ್ಮನವಿ ಸಲ್ಲಿಸಿ­­ದ್ದರು. ‘ವಿಚಾರಣೆ ನ್ಯಾಯ­ಸಮ್ಮತ­ವಾಗಿ ನಡೆದಿಲ್ಲ. ವಾಸ್ತವ ಸಂಗ­ತಿಗೆ ವ್ಯತಿ­ರಿಕ್ತ­ವಾಗಿ ಕಟ್ಟುಕತೆ­ಯನ್ನು ಒಪ್ಪಿ­ಕೊ­ಳ್ಳು­ವಂ­ತೆ ಕಿರುಕುಳ ನೀಡ­ಲಾ­ಗಿತ್ತು’ ಎಂದು ಮುಕೇಶ್‌್ ಹಾಗೂ ಪವನ್‌್ ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.