ADVERTISEMENT

ಎಐಎಡಿಎಂಕೆ ಬೆಂಬಲ: ಯೆಚೂರಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಮೋದಿ ಉಪವಾಸಕ್ಕೆಬೆಂಬಲಿಸಿರುವ ಎಐಎಡಿಎಂಕೆ ನಿರ್ಧಾರ ಸರಿಯಲ್ಲ ಎಂದು ಸಿಪಿಐ ಭಾನುವಾರ ಟೀಕಿಸಿದೆ.

ಅಹಮದಾಬಾದ್‌ನಲ್ಲಿ ಶನಿವಾರ ಆರಂಭವಾದ ಮೋದಿ ಅವರ ಮೂರು ದಿನಗಳ ಸದ್ಭಾವನಾ  ಉಪವಾಸದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಐಎಡಿಎಂಕೆಯ ಪ್ರತಿನಿಧಿಯಾಗಿ ವಿ.ಮೈತ್ರೇಯನ್ ಮತ್ತು ತಂಬಿದೊರೈ ಅವರನ್ನು ಜಯಲಲಿತಾ ಕಳುಹಿಸಿದ್ದರು.

ಎಐಎಡಿಎಂಕೆ ನೀತಿಯನ್ನು ಯೆಚೂರಿ ಕಟುವಾಗಿ ಖಂಡಿಸಿದ್ದಾರೆ. ಮೋದಿ ಅವರ ಈ ಉಪವಾಸ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಾಗಿದೆ ಎಂದೂ ಅವರು ಆರೋಪಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT