ಹೈದರಾಬಾದ್: ವಿಜಯವಾಡದಲ್ಲಿ ಶನಿವಾರ ನಡೆಯಬೇಕಿದ್ದ ಸಭೆಯಲ್ಲಿ ಭಾಗವಹಿಸಬೇಕಿದ್ದ ಪ್ರಸಿದ್ಧ ಲೇಖಕ ಪ್ರೊ.ಕಂಚ ಐಲಯ್ಯ ಅವರನ್ನು ಪೊಲೀಸರು ಶುಕ್ರವಾರ ರಾತ್ರಿಯೇ ಗೃಹಬಂಧನದಲ್ಲಿ ಇರಿಸಿದ್ದಾರೆ.
ಐಲಯ್ಯ ಉಪನ್ಯಾಸ ನೀಡಬೇಕಿದ್ದ ಸಭಾಂಗಣದಲ್ಲೇ ವೈಶ್ಯ ಮತ್ತು ಬ್ರಾಹ್ಮಣ ಸಮುದಾಯದವರು ಸಾರ್ವಜನಿಕ ಸಭೆ ಆಯೋಜಿಸಿದ್ದು, ಐಲಯ್ಯ ಭಾಗವಹಿಸದಂತೆ ತಡೆಯಲು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ಗೃಹ ಬಂಧನ ವಿರೋಧಿಸಿ ತೆಲಂಗಾಣ ಸಾಮಾಜಿಕ ಸಂಘಟನೆಗಳ ಒಕ್ಕೂಟದ ಸದಸ್ಯರು ಐಲಯ್ಯ ಅವರ ಮನೆ ಬಳಿ ಧರಣಿ ನಡೆಸಿದರು. ಐಲಯ್ಯ ಅವರು ಇಂಗ್ಲಿಷ್ನಿಂದ (ಸೋಷಿಯಲ್ ಸ್ಮಗ್ಲರ್ಸ್) ತೆಲುಗಿಗೆ ಭಾಷಾಂತರಿಸಿದ ಪುಸ್ತಕ ‘ಸಾಮಾಜಿಕ ಸ್ಮಗ್ಲರ್ಲು: ಕೋಮಟಲು’ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವೈಶ್ಯ ಸಮುದಾಯ, ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.