ಜೈಪುರ (ಐಎಎನ್ಎಸ್): ಆಹಾರ ಕಲಬೆರಕೆ ಪ್ರಕರಣದ ವಿಚಾರಣೆ ನಡೆಸಿದ ರಾಜಾಸ್ತಾನ ನ್ಯಾಯಾಲಯವು ಇಲ್ಲಿನ ಕಿರಾಣಿ ಅಂಗಡಿ ಮತ್ತು ಸಿಹಿ ತಿನಿಸು ಮಾರಾಟ ಮಳಿಗೆಗೆ `ನಾವು ಕಲಬೆರಕೆದಾರರು~ ಎಂದು ಫಲಕ ಹಾಕಬೇಕು ಎಂದು ಮಾದರಿ ಶಿಕ್ಷೆಯೊಂದನ್ನು ವಿಧಿಸಿದೆ.
ಈ ಎರಡು ಕಲಬೆರಕೆ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ರೂ 1.10 ಲಕ್ಷ ದಂಡ ವಿಧಿಸಿದ್ದಲ್ಲದೆ, ಗ್ರಾಹಕರಿಗೆ ಕಾಣಿಸುವಂತೆ ಅಂಗಡಿಯ ಮುಂದೆ `ನಾವು ಕಲಬೆರಕೆದಾರರು~ ಎಂಬ ಫಲಕಹಾಕಿಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಈ ರೀತಿ ಫಲಕ ಹಾಕುವುದರಿಂದ ಗ್ರಾಹಕರಿಗೆ ಅಂಗಡಿಯ ಬಗ್ಗೆ ಮಾಹಿತಿ ದೊರೆತು ಅವರಲ್ಲಿ ಜಾಗೃತಿ ಮೂಡುತ್ತದೆ.
ಇದು ಕಲಬೆರಕೆ ಮಾಡುವವರಿಗೆ ಒಂದು ಪಾಠವಾಗಲಿದೆ ಎಂದು ಹೇಳಲಾಗಿದೆ. ಕಲಬೆರಕೆ ನಡೆಯುತ್ತಿದೆ ಎಂಬ ಆರೋಪ ಬಂದ ಮೇಲೆ ಆಹಾರ ಭದ್ರತಾ ಇಲಾಖೆ ಈ ಅಂಗಡಿಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.