ADVERTISEMENT

ಕಲ್ಲಿದ್ದಲು ಹಗರಣ: ಮತ್ತೆರಡು ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:00 IST
Last Updated 15 ಅಕ್ಟೋಬರ್ 2012, 9:00 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತೆರಡು ಹೊಸ ಪ್ರಕರಣಗಳನ್ನು ಸೋಮವಾರ ದಾಖಲಿಸಿಕೊಂಡಿದೆ.

ಕಲ್ಲಿದ್ದಲು ಖರೀದಿ ವ್ಯವಹಾರದಲ್ಲಿ ನಕಲಿ ದಾಖಲೆ ನೀಡಿರುವ  ಮತ್ತು ಮೋಸ ಮಾಡಿರುವ ಆರೋಪದಡಿಯಲ್ಲಿ  ಮೂಲ ಸೌಕರ್ಯ ಮತ್ತು ಉಕ್ಕು ಕಂಪೆನಿಗಳ ವಿರುದ್ಧ ದೆಹಲಿ ಮತ್ತು ಹೈದರಾಬಾದ್‌ನಲ್ಲಿ  ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ದೇಶದ 16 ಕಡೆಗಳಲ್ಲಿ ತನಿಖೆ ನಡೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.