
ಪ್ರಜಾವಾಣಿ ವಾರ್ತೆಜಮ್ಮು (ಪಿಟಿಐ/ಐಎಎನ್ಎಸ್): ಜಮ್ಮು ಮತ್ತು ಕಾಶ್ಮೀರ ಗಡಿಭಾಗದಲ್ಲಿ ಪಾಕಿಸ್ತಾನ ಸೈನಿಕರು ಶುಕ್ರವಾರ ಮಧ್ಯಾಹ್ನ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.
ಘಟನೆಯು ಭಾರತ-ಪಾಕ್ ಗಡಿ ಪ್ರದೇಶವಾದ ಪೂಂಚ್ ವಲಯದಲ್ಲಿ ನಡೆದಿದ್ದು, ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೈನಿಕರು ಅಪ್ರಚೋದಿತವಾಗಿ ಭಾರಿ ಗಾತ್ರದ ಮೆಷಿನ್ ಗನ್, ರಾಕೆಟ್ಗಳು ಹಾಗೂ ಗ್ರೆನೇಡ್ಗಳ ಮೂಲಕ ತೀವ್ರತರವಾಗಿ ದಾಳಿ ನಡೆಸಿದರೆಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಹುತಾತ್ಮ ಯೋಧನನ್ನು ಲ್ಯಾನ್ಸ್ ನಾಯಕ್ ಬಚನ್ ಎಂದು ಗುರತಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳೂ ಕೂಡ ಪಾಕಿಸ್ತಾನದತ್ತ ಗುಂಡಿನ ದಾಳಿ ನಡೆಸಿವೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.