ADVERTISEMENT

ಕೋಮುಗಲಭೆ: 9 ಸಾವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:35 IST
Last Updated 7 ಸೆಪ್ಟೆಂಬರ್ 2013, 19:35 IST

ಲಖನೌ (ಪಿಟಿಐ): ಎರಡು ಕೋಮುಗಳ ನಡುವೆ ಶನಿವಾರ ನಡೆದ ಗುಂಪು ಘರ್ಷಣೆಯಲ್ಲಿ ಖಾಸಗಿ ಟಿ.ವಿ ಚಾನೆಲ್‌ನ ವರದಿಗಾರ ಮತ್ತು ಛಾಯಾಗ್ರಾಹಕರೊಬ್ಬರು ಸೇರಿದಂತೆ 9 ಮಂದಿ ಮೃತಪಟ್ಟು, 34 ಜನರು ಗಾಯಗೊಂಡಿರುವ ಘಟನೆ  ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ನಡೆದಿದೆ.

ಐಬಿಎನ್7 ಚಾನೆಲ್‌ನ ವರದಿಗಾರ ರಾಜೇಶ್ ವರ್ಮಾ, ಛಾಯಾಗ್ರಾಹಕ ಇಸ್ರಾರ್ ಮೃತಪಟ್ಟಿದ್ದಾರೆ. ಪರಿಸ್ಥಿತಿ ನಿಭಾಯಿಸಲು  ಸೇನೆ  ಕರೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.