ADVERTISEMENT

ಗಿರಣಿ ವ್ಯವಸ್ಥಾಪಕ ಸೇರಿ 3 ಬಂಧನ

ವಿಷಾನಿಲ ಟ್ಯಾಂಕ್‌ಗೆ ಬಿದ್ದು ಏಳು ಸಾವು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಈರೋಡ್‌, ತಮಿಳುನಾಡು (ಪಿಟಿಐ): ಪೆರುಂದುರೈ ಬಳಿ ಮಂಗಳವಾರ ಬಟ್ಟೆ ಗಿರಣಿ ಬಣ್ಣ ಹಾಕುವ ಘಟಕದಲ್ಲಿ ಉಸಿರುಗಟ್ಟಿಸುವ ವಿಷಾನಿಲ ತುಂಬಿ­ಕೊಂಡಿದ್ದ ಟ್ಯಾಂಕ್‌ ಒಳಗೆ ಬಿದ್ದಿದ್ದ ಏಳು ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಘಟಕದ ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಾಲಿನ್ಯ ನಿಯಂತ್ರಣ  ಉಸ್ತುವಾರಿ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿ­ಯನ್ನೂ ಬಂಧಿಸಲಾಗಿದೆ ಎಂದು ಪೊಲೀ­ಸರು ಮಾಹಿತಿ ನೀಡಿದ್ದಾರೆ.
ಐವರ ಶವವನ್ನು ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ. ಉಳಿದ ಇಬ್ಬರು ನೇಪಾಳದವರಾದ ಕಾರಣ ಇಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪೊಲೀ­ಸರು ಹೇಳಿದ್ದಾರೆ.

ಕಾರ್ಖಾನೆಗೆ ವಿದ್ಯುತ್‌ ಸಂಪರ್ಕ ಸ್ಥಗಿತ­ಗೊಳಿಸಿ, ಬಣ್ಣ ಹಾಕುವ ಘಟಕದ ಬಾಗಿಲನ್ನು ಮುಚ್ಚಿಸಲಾಗುವುದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿ­ಕಾರಿಗಳು ಹೇಳಿದ್ದಾರೆ.

ಘಟನೆ ಹಿನ್ನೆಲೆ: ಇಬ್ಬರು ಕೆಲಸಗಾರರು ಮಂಗಳವಾರ ಅಕಸ್ಮಾತಾಗಿ ವಿಷಾನಿಲ ಟ್ಯಾಂಕ್‌ ಒಳಗೆ ಬಿದ್ದಿದ್ದಾರೆ.  ಅಲ್ಲೇ ಇದ್ದ ಐವರು ಅವರನ್ನು ಬಚಾವ್‌ ಮಾಡಲು ಟ್ಯಾಂಕ್‌ಗೆ ಹಾರಿದ್ದಾರೆ. ಘಟಕದಲ್ಲಿದ್ದ ಉಳಿದ ಕೆಲಸಗಾರರು ಮೋಟಾರು ದುರಸ್ತಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಏಳೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.