ADVERTISEMENT

ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2011, 7:25 IST
Last Updated 9 ಆಗಸ್ಟ್ 2011, 7:25 IST
ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ
ಗುಜರಾತ್ ಅಧಿಕಾರಿ ಸಂಜೀವ ಭಟ್ ಗೆ ಅಮಾನತು ಶಿಕ್ಷೆ   

ಗಾಂಧಿನಗರ (ಐಎಎನ್‌ಎಸ್): ಗೋಧ್ರಾ ದುರಂತದ ಸಂದರ್ಭದಲ್ಲಿನ ಗುಜರಾತ್  ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಣ್ಣ ಬಯಲು ಮಾಡಿ ಖ್ಯಾತಿಗಳಿಸಿದ್ದ ಗುಜರಾತ್ ಸೇವೆಗೆ ಸೇರಿದ್ದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಭಟ್ ಅವರನ್ನು ಸೋಮವಾರ ತಡರಾತ್ರಿ ಸೇವೆಯಿಂದ ಅಮಾನತ್ತಿನಲ್ಲಿಡಲಾಗಿದೆ. 

ಹಿಂದೆ 2002ರಲ್ಲಿ ಗೋಧ್ರಾ ರೈಲು ದುರಂತಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಪ್ರತಿಕಾರದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದ ಸಭೆಯಲ್ಲಿ ತಾವು   ಭಾಗವಹಿಸಿದ್ದಾಗಿ ಹೇಳಿದ ಕಾರಣ ಅವರು  ಪ್ರಸಿದ್ಧಿಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.