ADVERTISEMENT

ಗುಜರಾತ್: ಐಪಿಎಸ್ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2011, 19:30 IST
Last Updated 30 ಸೆಪ್ಟೆಂಬರ್ 2011, 19:30 IST
ಗುಜರಾತ್: ಐಪಿಎಸ್ ಅಧಿಕಾರಿ ಬಂಧನ
ಗುಜರಾತ್: ಐಪಿಎಸ್ ಅಧಿಕಾರಿ ಬಂಧನ   

ಅಹ್ಮದಾಬಾದ್ (ಪಿಟಿಐ): ನರೇಂದ್ರ ಮೋದಿ ವಿರುದ್ಧ ಗೋಧ್ರಾ ಘಟನೆ ನಂತರದ ಗಲಭೆಗಳನ್ನು ಪ್ರಚೋದಿಸಿದ ಆರೋಪ ಹೊರಿಸಿದ್ದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಶುಕ್ರವಾರ ಬಂಧಿಸಲಾಯಿತು.

ಪೊಲೀಸ್ ಕಾನ್‌ಸ್ಟಬಲ್ ಡಿ.ಪಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿದೆ. 2002 ಗೋಧ್ರಾ ಗಲಭೆ ನಿರ್ವಹಣೆ ವೇಳೆ ಭಟ್ ಮೇಲ್ವಿಚಾರಣೆಯಡಿ ಪಂತ್ ಕೆಲಸ ಮಾಡಿದ್ದರು.

ಸರ್ಕಾರಿ ನೌಕರನಿಗೆ ಬೆದರಿಕೆ ಹಾಕಿದ, ಸುಳ್ಳು ಸಾಕ್ಷ್ಯ ಹೆಣೆದ ಹಾಗೂ ಅಕ್ರಮವಾಗಿ ದಿಗ್ಬಂಧನದಲ್ಲಿ ಇರಿಸಿದ ಆರೋಪಗಳನ್ನು ಭಟ್ ವಿರುದ್ಧ ಹೊರಿಸಲಾಗಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.