ADVERTISEMENT

ಗೋವಾದ ಮಹಾಲ್ಸಾ ರಥೋತ್ಸವ: ರಥದ ಗಾಲಿಗೆ ಸಿಲುಕಿ ಕಾರವಾರದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 8:40 IST
Last Updated 24 ಫೆಬ್ರುವರಿ 2011, 8:40 IST

ಪಣಜಿ,(ಐಎಎನ್ಎಸ್): ಮೊಮಗನನ್ನು ರಕ್ಷಿಸಲು ಹೋದ ಕರ್ನಾಟಕದ ಕಾರವಾರದ 75 ವರ್ಷದ ವ್ಯಕ್ತಿಯೊಬ್ಬ ರಥದ ಗಾಲಿಗೆ ಸಿಲುಕಿ ಸಾವಿಗೀಡಾದ ದಾರುಣ ಘಟನೆ ಗುರುವಾರ ಮುಂಜಾನೆ ಮರ್ಡೊಲದ ಮಹಾಲ್ಸಾ ದೇವಸ್ಥಾನದಲ್ಲಿ ನಡೆದಿದೆ ಎಂದು ಇಲ್ಲಿನ ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.

 ರಥೋತ್ಸವದ ಸಂದರ್ಭದಲ್ಲಿ ಮೊಮ್ಮಗ ರಥದ ಮುಂಭಾಗಕ್ಕೆ ಹೋದಾಗ ಅವನನ್ನು ಉಳಿಸಲು ಧಾವಿಸಿದ ಅವರು  ಗಾಲಿಗೆ ಸಿಲುಕಿ ಸಾವನ್ನಪ್ಪಿದರು.  ಮೃತರನ್ನು ಕಾರವಾರದ ಪುಂಡಲಿಕ ವಿಠಲ್ ನ್ಯೂರೇಕರ್ ಎಂದು ಗುರುತಿಸಲಾಗಿದೆ. 

ಕಾರವಾರದ ನಿವಾಸಿಯಾಗಿದ್ದ  ಅವರ ಪ್ರತಿವರ್ಷದಂತೆ, ಈಬಾರಿಯೂ ಮಹಾಲ್ಸಾದೇವಸ್ಥಾನದಲ್ಲಿ  ಫೆಬ್ರವರಿಯಲ್ಲಿ ನಡೆಯುವ ರಥೋತ್ಸವದಲ್ಲಿ ಪಾಲ್ಗೋಳ್ಳಲು  ಎರಡು ದಿನ ಮೊದಲೇ ಕುಟುಂಬದ ಸಮೇತ ಇಲ್ಲಿಗೆ ಆಗಮಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT