ನವದೆಹಲಿ : ಏರ್ಸೆಲ್–ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸಂಬಂಧಿಗಳ ಮತ್ತು ಆಪ್ತರ ಮನೆಗಳ ಮೇಲೆ ಜಾರಿನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ನಾಲ್ಕು ಹಾಗೂ ಕೋಲ್ಕತ್ತದ ಎರಡು ನಿವಾಸಗಳ ಮೇಲೆ ದಾಳಿ ನಡೆದಿದೆ.
ಚೆನ್ನೈನ ತೆನಾಯಂಪೇಟ್ನಲ್ಲಿರುವ ಕಾರ್ತಿ ಚಿದಂಬರಂ ಅವರ ಸೋದರಮಾವ ಎಸ್.ಕೈಲಾಸಂ ನಿವಾಸ ಹಾಗೂ ಕುಟುಂಬದ ಆಪ್ತರಾದ ಎಸ್.ಸಾಂಬಮೂರ್ತಿ, ರಾಮ್ಜಿ ನಟರಾಜನ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೋಲ್ಕತ್ತದಲ್ಲಿ ಮನೋಜ್ ಮೋಹಂಕರಿಗೆ ಸೇರಿದ ಲೀ ರೋಡ್ ಹಾಗೂ ಲೌಲಾಕ್ ಪ್ರದೇಶದಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
2006ರಲ್ಲಿ ಪಿ.ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ವೇಳೆ ವಿದೇಶಿ ಹೂಡಿಕೆ ಪ್ರವರ್ತನೆ ಮಂಡಳಿಯು (ಎಫ್ಐಪಿಬಿ) ಏರ್ಸೆಲ್–ಮ್ಯಾಕ್ಸಿಸ್ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇ.ಡಿ ಈ ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.