ADVERTISEMENT

ಜಯಾ ಸಾವಿನ ತನಿಖೆ: ಮತ್ತೆ ಕಾಲಾವಕಾಶ ಕೋರಿದ ಆಯೋಗ

ಪಿಟಿಐ
Published 22 ಮೇ 2018, 19:52 IST
Last Updated 22 ಮೇ 2018, 19:52 IST
ಜಯಾ ಸಾವಿನ ತನಿಖೆ: ಮತ್ತೆ ಕಾಲಾವಕಾಶ ಕೋರಿದ ಆಯೋಗ
ಜಯಾ ಸಾವಿನ ತನಿಖೆ: ಮತ್ತೆ ಕಾಲಾವಕಾಶ ಕೋರಿದ ಆಯೋಗ   

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಆಯೋಗ ವಿಚಾರಣೆ ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ಕೇಳಿದೆ.

ಇದೇ ಜೂನ್‌ 24ಕ್ಕೆ ಆಯೋಗದ ಅವಧಿ ಪೂರ್ಣಗೊಳ್ಳಬೇಕಿತ್ತು. ಆದರೆ, ಆಯೋಗ ಇಲ್ಲಿಯವರೆಗೆ 50 ಸಾಕ್ಷಿಗಳ ಹೇಳಿಕೆಯನ್ನು ಮಾತ್ರ ದಾಖಲಿಸಿದೆ.ಇನ್ನೂ ಹಲವು ಸಾಕ್ಷಿಗಳ ಹೇಳಿಕೆ ಪಡೆಯುವುದು ಬಾಕಿ ಇದೆ.

ಈ ಕುರಿತು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿರುವ ಆಯೋಗವು ಇನ್ನಷ್ಟು ಕಾಲಾವಕಾಶ ಕೋರಿದೆ ಎಂದು ಮೂಲಗಳು ತಿಳಿಸಿವೆ. ಅವಧಿ ವಿಸ್ತರಣೆಗೆ ಆಯೋಗ ಮನವಿ ಸಲ್ಲಿಸುತ್ತಿರುವುದು ಇದು ಎರಡನೇ ಬಾರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.