ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿನ ಏಮ್ಸ್ನಲ್ಲಿ ಸೋಮವಾರ ಕಿಡ್ನಿ (ಮೂತ್ರ ಪಿಂಡ) ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರು.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಜೇಟ್ಲಿ ಮತ್ತು ಕಿಡ್ನಿ ದಾನ ಮಾಡಿದವರ ಆರೋಗ್ಯ ಸ್ಥಿರವಾಗಿದೆ.
ಜೇಟ್ಲಿ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ತಿಂಗಳಿನಿಂದ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಮೂತ್ರಪಿಂಡ ತಜ್ಞ ಅಪೋಲೊ ಆಸ್ಪತ್ರೆಯ ಡಾ. ಸಂದೀಪ್ ಗುಲೇರಿಯಾ ಹಾಗೂ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಶಸ್ತ್ರಚಿಕಿತ್ಸೆ ನಡೆಸಿ ದರು. ಮುಂದಿನ ವಾರ ಲಂಡನ್ನಲ್ಲಿ ನಿಗದಿಯಾಗಿದ್ದ 10ನೇ ಭಾರತ
ಇಂಗ್ಲೆಂಡ್ ಆರ್ಥಿಕ ಶೃಂಗಸಭೆಯಲ್ಲಿ ಭಾಗಿಯಾಗಬೇಕಿದ್ದ ಅವರು ಅನಾರೋಗ್ಯದ ಕಾರಣ ಪ್ರವಾಸ ರದ್ದುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.