ಚೆನ್ನೈ: ದಂಡ ಕಟ್ಟಲು ಸೂಚಿಸಿದ ಟಿಕೆಟ್ ಪರೀಕ್ಷಕರನ್ನು ಪ್ರಯಾಣಿಕರ ಗುಂಪೊಂದು ರೈಲಿನಿಂದ ಹೊರದಬ್ಬಿದೆ.
ಯಶವಂತಪುರ– ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಎಸ್–12 ಕೋಚ್ನಲ್ಲಿ ಇಬ್ಬರು ಪ್ರಯಾಣಿಕರು ಸರಿಯಾದ ಗುರುತಿನ ದಾಖಲೆ ಹೊಂದಿರದ ಕಾರಣ ದಂಡ ಪಾವತಿಸಲು ಟಿಕೆಟ್ ಪರೀಕ್ಷಕ ಕೇಳಿದ್ದಾರೆ. ಇದರಿಂದ ಕುಪಿತಗೊಂಡು ಗುಂಪು ಟಿಕೆಟ್ ಪರೀಕ್ಷಕರನ್ನು ತಮಿಳುನಾಡಿನ ಕಟಪಾಡಿ ಜಂಕ್ಷನ್ ಬಳಿ ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದೆ. ಬೆಂಗಳೂರಿನ ಟಿಕೆಟ್ ಪರೀಕ್ಷಕ ಸಂತೋಷ್ ಕುಮಾರ್ ಗಾಯ
ಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವಕರ ಗುಂಪು ಹಲ್ಲೆ ನಡೆಸಿದೆ. ರೈಲು ನಿಧಾನವಾಗಿ ಚಲಿಸುತ್ತಿತ್ತು. ಹಾಗಾಗಿ ಹೆಚ್ಚಿನ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.