ಬೆಂಗಳೂರು: ಭಾನುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾಷಣದ ವಿಡಿಯೊವೊಂದು ‘ಉತ್ತರಾಪ್ರಚಂಡ್’ ಟ್ರೆಂಡ್ ಸೃಷ್ಟಿಸಿದೆ.
ಎಎಪಿ ಮುಖಂಡ ಕೇಜ್ರಿವಾಲ್ ‘ಉತ್ತರಾಖಂಡ’ ಶಬ್ದದ ಉಚ್ಚರಣೆಗಾಗಿ ಪಟ್ಟ ಶ್ರಮವನ್ನು ಬಿಂಬಿಸುವಂತಹ ವಿಡಿಯೊ ಟ್ವಿಟರ್ನಲ್ಲಿ ಹರಿದಾಡುತ್ತಿದೆ. ಇದೇ ವಿಡಿಯೊ ಬಳಸಿ ಟ್ವೀಟಿಗರು ಕೇಜ್ರಿವಾಲ್ ಅವರ ಕಾಲೆಳೆದಿದ್ದಾರೆ. ಭಾಷಣದಲ್ಲಿ ಅವರು ಉತ್ತರಾಖಂಡವನ್ನು ಉತ್ತರಾಪ್ರಚಂಡ್ ಎಂದು ಸಂಬೋಧಿಸಿದ್ದಾರೆ.
‘ಯಾರಾದರೂ ಉತ್ತರಾಪ್ರಚಂಡದಿಂದ ಇದ್ದೀರಾ? ಅಲ್ಲಿಗೆ ಭೇಟಿ ನೀಡಲು ಬಯಸುವಿರಾ?’ ಎಂದು ಟ್ವೀಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.