ADVERTISEMENT

ತಮಿಳುನಾಡು : ಕಾವೇರಿ ನದಿ ಪಾತ್ರದ ರೈತನ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಚೆನ್ನೈ: ಕಾವೇರಿ ನದಿ ಪಾತ್ರದ ತಿರುವೂರು ಜಿಲ್ಲೆಯ ರೈತನೊಬ್ಬ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 15 ದಿನಗಳಲ್ಲಿ ಸಾವಿಗೆ ಶರಣಾದ ರೈತರ ಸಂಖ್ಯೆ ಐದಕ್ಕೆ ಏರಿದೆ. ಅಂದಕರೈ ಗ್ರಾಮದ ರೈತ ಅಬ್ದುಲ್ ರಹೀಂ (55) ತನ್ನ ಹೊಲದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

`ಬತ್ತದ ಬೆಳೆಗೆ ನೀರಿಲ್ಲದ ಕಾರಣಕ್ಕೆ ಈತ ಖಿನ್ನನಾಗಿದ್ದ. ಪಂಪ್‌ಸೆಟ್ ಖರೀದಿಗಾಗಿ ಸಾಲವನ್ನೂ ಮಾಡಿಕೊಂಡಿದ್ದ. ತನಿಖೆಯ ನಂತರವಷ್ಟೇ ವಸ್ತು ಸ್ಥಿತಿ ಗೊತ್ತಾಗುತ್ತದೆ' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.