ADVERTISEMENT

ತಮಿಳುನಾಡು: ನಾಲ್ಕು ದೋಣಿಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ರಾಮೇಶ್ವರ (ಪಿಟಿಐ): ಧನುಷ್ಕೋಟಿ ಸಮುದ್ರ ತೀರದ ಬಳಿ ಮೀನು ಹಿಡಿಯುತ್ತಿದ್ದ ತಮಿಳುನಾಡಿನ ಮೀನುಗಾರರ ದೋಣಿ ಮೇಲೆ ಶ್ರೀಲಂಕಾ ನೌಕಪಡೆಯು ಭಾನುವಾರ ದಾಳಿ ಮಾಡಿ ನಾಲ್ವರು ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

 ಈ ಘಟನೆಯಿಂದ ಸ್ಥಳೀಯ ಮೀನುಗಾರರ 6 ದೋಣಿ ಮತ್ತು ಬಲೆಗಳಿಗೆ ಹಾನಿಯಾಗಿವೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ  ತ್ಯಾಗರಾಜನ್ ತಿಳಿಸಿದ್ದಾರೆ.  ಶ್ರೀಲಂಕಾ ನೌಕಾಪಡೆ ದಾಳಿಯಿಂದ ಮೀನುಗಾರರು ಹಿಂತಿರುಗಿ ಬರಲು ಸಾಧ್ಯವಾಗಿಲ್ಲ. ಅವರ ರಕ್ಷಣೆಗೆ ರಕ್ಷಣಾ ಪಡೆಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.