ರಾಮೇಶ್ವರ(ಪಿಟಿಐ): ಶ್ರೀಲಂಕಾ ವ್ಯಾಪ್ತಿಗೊಳಪಡುವ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ 13 ಜನ ತಮಿಳುನಾಡು ಮೀನುಗಾರರನ್ನು ಲಂಕಾ ನೌಕಾಪಡೆ ಬುಧವಾರ ರಾತ್ರಿ ತಮ್ಮ ವಶಕ್ಕೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೀನುಗಾರರು ಎರಡು ಯಾಂತ್ರೀಕೃತ ಹಡಗಿನಲ್ಲಿ ನಾಗಪಟ್ಟಣಂ ಜಿಲ್ಲೆಯ ಅಕ್ಕರೈಪೆಟೈ ಪ್ರದೇಶದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದ್ದು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಲಂಕಾ ನೌಕಾಪಡೆ ಮೊದಲಿಗೆ ಮೀನುಗಾರರತ್ತ ಬಾಂಬನ್ನು ಎಸೆಯಿತಾದರೂ ತಪ್ಪಿಸಿಕೊಂಡ ಮೀನುಗಾರರನ್ನು ನಂತರ ಬಂಧಿಸಲಾಯಿತು ಎಂದು ಮೀನುಗಾರಿಕಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.