ಚೆನ್ನೈ, (ಪಿಟಿಐ): ತಮಿಳುನಾಡು ಸಚಿವ ಸಿ. ಕರುಪ್ಪುಸಾಮಿ (57) ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಮೃತರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಯುವಜನ ಮತ್ತು ಕ್ರೀಡಾ ಕಲ್ಯಾಣ ಸಚಿವರಾಗಿದ್ದ ಕರುಪ್ಪುಸಾಮಿ, ಆಸ್ಪತ್ರೆ ಸೇರಿದ ಬಳಿಕ ಆ ಖಾತೆಯನ್ನು ಶಿಕ್ಷಣ ಸಚಿವ ಸಿ.ವಿ. ಷಣ್ಮುಗಂ ಅವರಿಗೆ ವಹಿಸಲಾಗಿತ್ತು
. ಪ್ರಸ್ತುತ ಖಾತೆ ರಹಿತ ಸಚಿವರಾಗಿದ್ದ ಕರುಪ್ಪುಸಾಮಿ ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿಯೂ ಆಗಿದ್ದರು. ಅವರು ಶಂಕರಂಕೋವಿಲ್ ಮೀಸಲು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.