ನವದೆಹಲಿ (ಐಎಎನ್ಎಸ್): ಸಾಮಾಜಿಕ ಸೇವಾಕರ್ತ ಅಣ್ಣಾ ಹಜಾರೆ ಅವರು ದಕ್ಷಿಣ ದೆಹಲಿಯಲ್ಲಿ ತಮ್ಮ `ಭ್ರಷ್ಟಾಚಾರ ವಿರೋಧಿ ಆಂದೋಲನದ~ ನೂತನ ಕಚೇರಿಯನ್ನು ಉದ್ಘಾಟಿಸಿದರು.
ದೇಶದ ಪ್ರತಿ ಮನೆ ಮನೆಗೂ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕಾಲಾವಕಾಶ ಈಗ ಒದಗಿ ಬಂದಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲು ನಾವು ಬದ್ಧರಾಗಿದ್ದೆವೆ. ಭ್ರಷ್ಟಾಚಾರ ಮುಕ್ತ ಭಾರತ ರೂಪಿಸುವುದೇ ನಮ್ಮ ಗುರಿಯಾಗಿದೆ ಎಂದು ಅಣ್ಣಾ ಹಜಾರೆ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ತಂಡಕ್ಕೆ ದೇಶದೆಲ್ಲೆಡೆಯಿಂದ 15 ಸದಸ್ಯರನ್ನು ನೇಮಕಮಾಡಲಾಗುವುದು. ಜನವರಿ 30 ರಿಂದ ಮತ್ತೆ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.