ಚೆನ್ನೈ : ತಮಿಳುನಾಡಿನ ರಾಜಕೀಯ ರಂಗವನ್ನು ಇತ್ತೀಚೆಗೆ ಪ್ರವೇಶಿಸಿರುವ ಚಿತ್ರನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಶನಿವಾರ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಂದು ದಶಕದ ಬಳಿಕ 67ರ ವಯೋಮಾನದ ಸಿನಿ ತಾರೆ ರಜನಿ ಹಿಮಾಲಯದ ದುನಗಿರಿ ಪ್ರದೇಶದ ಗುಹೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಗುಹೆಗಳಲ್ಲಿ ಮಹಾವತಾರ ಬಾಬಾಜಿ ಎಂಬ ಮುನಿಯ ಆತ್ಮ ನೆಲೆಸಿದೆ ಎಂಬ ನಂಬಿಕೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.