ADVERTISEMENT

ನಿತ್ಯಾನಂದ ನೇಮಕಕ್ಕೆ ಕಂಚಿಶ್ರೀ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಕೃಷ್ಣಗಿರಿ (ಪಿಟಿಐ): ಇತಿಹಾಸ ಪ್ರಸಿದ್ಧ ಮದುರೆಯ `ಅಧೀನಂ~ ಮಹಾಸಂಸ್ಥಾನ ಪೀಠದ ಉತ್ತರಾಧಿಕಾರಿಯಾಗಿ ಸ್ವಾಮಿ ನಿತ್ಯಾನಂದ ಅವರನ್ನು ನೇಮಕ ಮಾಡಿರುವ ಕ್ರಮದ ವಿರುದ್ಧ ಕಂಚಿಯ ಜಯೇಂದ್ರ ಸರಸ್ವತಿ ಧ್ವನಿ ಎತ್ತಿದ್ದಾರೆ.

ಅಧೀನಂ ಪೀಠಾಧಿಪತಿಗಳು ಕೇಶಮುಂಡನ ಮಾಡಿಸಿಕೊಂಡು ರುದ್ರಾಕ್ಷಿ ಧರಿಸುವುದು ಸಂಪ್ರದಾಯ. ಆದರೆ, ನಿತ್ಯಾನಂದ ಅವರು ಕೇಶಮುಂಡನ ಮಾಡಿಸಿಕೊಂಡಿಲ್ಲ. ಮೇಲಾಗಿ ಅವರ ಮೇಲೆ ಲೈಂಗಿಕ ಹಗರಣದ ಆರೋಪವಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.