<p><strong>ಕಠ್ಮಂಡು (ಪಿಟಿಐ):</strong> ಭೀಕರ ಭೂಕಂಪದಿಂದ ತತ್ತರಿಸಿರುವ ನೆರೆಯ ನೇಪಾಳದಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಾಣದ ಸುಮಾರು 125 ಜನರು ಸಿಲುಕಿದ್ದಾರೆ.</p><p>ದೆಹಲಿಯಲ್ಲಿರುವ ಮಹಾರಾಷ್ಟ್ರ ಮಾಹಿತಿ ಕೇಂದ್ರದ ಪ್ರಕಾರ, ನಾಸಿಕ್ನಿಂದ ನೇಪಾಳಕ್ಕೆ ಸುಮಾರು 80 ಜನರು ತೆರೆಳಿದ್ದರು. ಅದೇ ರೀತಿ ಪರ್ವತಾರೋಹಣಕ್ಕೆ 15–20 ಜನರು ತೆರಳಿದ್ದರು.</p><p>‘ರಾಜ್ಯದ ಹಲವೆಡೆಯಿಂದ ನಮಗೆ ಕರೆಗಳು ಬರುತ್ತಿವೆ. ಆದರೆ ನಾವು ಪ್ರವಾಸಿಗರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಾಸಿಕ್ನಿಂದ ಸುಮಾರು 80 ಜನರು ಯಾತ್ರೆಗೆ ತೆರಳಿದ್ದರು. ಉಳಿದವರು ಟ್ರೆಕ್ಕಿಂಗ್ಗಾಗಿ ಹೋಗಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br/> ಈ ನಡುವೆ, ನೇಪಾಳಕ್ಕೆ ತೆರಳಿದ್ದ ಹೈದರಾಬಾದಿನ 25 ಪ್ರವಾಸಿಗರು ಕಠ್ಮಂಡುವಿನಲ್ಲಿ ಸುರಕ್ಷಿತವಾಗಿದ್ದಾರೆ.</p><p>ಅವರನ್ನು ಪ್ರವಾಸಕ್ಕೆ ಕರೆದೊಯ್ದಿದಿರುವ ಸಂಘಟಕ ಗೌರಿಶಂಕರ್, ತಮ್ಮ ತಂಡದ ಸದಸ್ಯರೆಲ್ಲರೂ ಸುರಕ್ಷಿತವಾಗಿದ್ದು, ಪಶುಪತಿನಾಥ್ ದೇವಾಲಯದ ಸಮೀಪದ ಮೈದಾನದಲ್ಲಿ ಇರುವುದಾಗಿ ಹೇಳಿದ್ದಾರೆ.</p><p>‘ಕಂಪನದ ಅನುಭವ ಆದಾಗ ನಾನು ಕಟ್ಟಡದ ನಾಲ್ಕನೇ ಅಂತಸ್ತಿನ ಬಾತ್ರೂಮ್ನಲ್ಲಿದ್ದೆ. ತಕ್ಷಣವೇ ಓಡಿ ಕೆಳಗೆ ಬಂದೆ. ಪಶುಪತಿನಾಥ್ ದೇವಾಲಯದ ಸಮೀಪದ ಮೈದಾನದಲ್ಲಿ ಇದೀಗ ಎಲ್ಲರೂ ಸುರಕ್ಷಿತವಾಗಿದ್ದೇವೆ’ಎಂದು ಅವರು ಪ್ರತಿಕ್ರಿಯಿಸಿದ್ದಾರೆ.</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.