ನವದೆಹಲಿ (ಪಿಟಿಐ): ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮುಸ್ಲಿಂ ಸಮುದಾಯದ ವಿರೋಧಿಯಾಗಿರಲಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅಡ್ವಾಣಿ ಅವರು ಅದಕ್ಕೆ ಪೂರಕವಾಗಿ ಪಟೇಲ್ ಅವರನ್ನು ಕುರಿತಂತೆ ಸಂಶೋಧನೆ ನಡೆಸಿರುವ ಇಸ್ಲಾಮಿಕ್ ವಿದ್ವಾಂಸ ಮತ್ತು ಕಾಂಗ್ರೆಸ್, ಮುಖಂಡ ರಫೀಕ್ ಜಕಾರಿಯಾ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ.
ರಾಷ್ಟ್ರಮಟ್ಟದ ನಿಯತಕಾಲಿಕೆಯೊಂದರ ಲೇಖನದಲ್ಲಿ ಪಟೇಲ್ ಅವರು `ದೃಷ್ಟಿಕೋನದಲ್ಲಿ ಕೋಮುವಾಗಿಯಾಗಿದ್ದರು' ಮತ್ತು ಜವಾಹರ್ ನೆಹರೂ ಅವರು `ಜಾತ್ಯತೀತ ರಾಷ್ಟ್ರೀಯತೆಯ' ಪ್ರತಿಕವಾಗಿದ್ದರು ಎಂಬ ಹೇಳಿಕೆ ಕುರಿತಂತೆ ಆಶ್ಚರ್ಯ ವ್ಯಕ್ತಪಡಿಸಿರುವ ಅಡ್ವಾಣಿ ಅವರು ಲೇಖನವು ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.