ADVERTISEMENT

ಪರಿಹಾರ ಕಾರ್ಯಕ್ಕೆ ವಿಶೇಷ ವಿಭಾಗ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ದೆಹಲಿ ಹೈಕೋರ್ಟ್‌ನಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ  ಮೃತಪಟ್ಟ ಕುಟುಂಬದವರಿಗೆ  ಹಾಗೂ ಗಾಯಗೊಂಡವರಿಗೆ ನೀಡುವ ಪರಿಹಾರ ಅಸಮರ್ಪಕವಾಗಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ  ದೆಹಲಿ ಸರ್ಕಾರ ಅದಕ್ಕಾಗಿಯೇ ವಿಶೇಷ ವಿಭಾಗವನ್ನು ತೆರೆದಿದೆ.

ಪರಿಹಾರ ಕಾರ್ಯದಲ್ಲಿನ ಅಸಮರ್ಪಕತೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ತೊಂದರೆಗೆ ಒಳಗಾಗಿರುವ ಕುಟುಂಬದವರು  ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಮರಿಗೆ ಬಸ್; 16 ಮಂದಿ ಸಾವು
ಜಮ್ಮು (ಪಿಟಿಐ):
ಬಸ್ಸೊಂದು 200ಅಡಿ ಆಳದ ಕಮರಿಗೆ ಉರುಳಿದ್ದರಿಂದ 16ಮಂದಿ ಸತ್ತು, 23ಜನರು ಗಾಯಗೊಂಡಿರುವ ಘಟನೆ ಇಲ್ಲಿನ ರಾಮಬಾನ ಜಿಲ್ಲೆಯಲ್ಲಿ  ಮಂಗಳವಾರ ಸಂಭವಿಸಿದೆ.

ಈ ದುರ್ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.ಂಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.