ನವದೆಹಲಿ (ಪಿಟಿಐ): ನಕಲಿ ದಾಖಲೆ ನೀಡಿ ಪೈಲಟ್ ಪರವಾನಗಿ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಹಿಂದೆ ನೀಡಿರುವ ಎಲ್ಲ ಪರವಾನಗಿಗಳ ತನಿಖೆಗೆ ಸರ್ಕಾರ ಆದೇಶಿಸಿದೆ. ಅಲ್ಲದೆ ಪ್ರಸಕ್ತ ಪರವಾನಗಿ ಪರೀಕ್ಷಾ ವ್ಯವಸ್ಥೆ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಿದೆ.
ಹಿಂದೆ ನೀಡಿದ್ದ ಎಲ್ಲ ಪರವಾನಗಿಗಳ ಸಂಪೂರ್ಣ ಪರಿಶೀಲನೆ ಮತ್ತು ಇನ್ನು ಮುಂದೆ ಪರವಾನಗಿಗಳನ್ನು ನೀಡುವಾಗ ವಿವರವಾದ ಪರಿಶೀಲನೆ ನಡೆಸಲು ಅನುವಾಗುವಂತಹ ವಿಧಾನಗಳನ್ನು ರೂಪಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ತಾವು ಸೂಚಿಸಿರುವುದಾಗಿ ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ರಾಜ್ಯಸಭೆಗೆ ತಿಳಿಸಿದ್ದಾರೆ. ಇಂಡಿಗೊ ಏರ್ಲೈನ್ಸ್ನ ಕ್ಯಾಪ್ಟನ್ ಪರ್ಮಿಂದರ್ ಕೌರ್ ಗುಲಟಿ ಬಂಧನ ಮತ್ತು ಇದೇ ಬಗೆಯ ಇನ್ನೂ ಮೂರು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.