ನವದೆಹಲಿ (ಪಿಟಿಐ): `ಕಾಂಗ್ರೆಸ್ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಸಾರ್ವಜನಿಕ ಹೇಳಿಕೆ ಕೊಡುವ ಬದಲು ಮೈತ್ರಿಕೂಟ ಬಿಟ್ಟು ಬನ್ನಿ~ ಎಂದು ಬಿಜೆಪಿ ಬುಧವಾರ ಯುಪಿಎ ಮಿತ್ರಪಕ್ಷಗಳಿಗೆ ಸವಾಲು ಹಾಕಿದೆ.
`ಸರ್ಕಾರವು ಮಿತ್ರ ಪಕ್ಷಗಳ ಮಾತಿಗೆ ಸೊಪ್ಪು ಹಾಕದಿದ್ದಾಗ ಬೆಂಬಲ ವಾಪಸ್ ಪಡೆಯುವುದೇ ಸರಿಯಾದ ಮಾರ್ಗ~ ಎಂದು ಪಕ್ಷದ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯುವುದಾಗಿ ಡಿಎಂಕೆ ಹಾಕಿದ್ದ ಬೆದರಿಕೆಗೆ ಪ್ರತಿಕ್ರಿಯಿಸುತ್ತಾ, `ಇದೊಂದು ಅತ್ಯಂತ ಸ್ವಾಗತಾರ್ಹ ಕ್ರಮ. ಮಿತ್ರ ಪಕ್ಷಗಳು ಸರ್ಕಾರದ ಭಾಗವಾಗಿರುವುದರಿಂದ ಬೆಲೆ ಏರಿಕೆಗೆ ಅವೂ ಅಷ್ಟೇ ಹೊಣೆಯಾಗಿವೆ~ ಎಂದಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡಿನಲ್ಲಿ ಕರುಣಾನಿಧಿ ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸುತ್ತಾ, `ಇದರಲ್ಲಿ ಯಾವ ಅರ್ಥವೂ ಇಲ್ಲ~ ಎಂದೂ ರೂಡಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.