ಪಟ್ನಾ/ಹೈದರಾಬಾದ್ (ಪಿಟಿಐ, ಐಎಎನ್ಎಸ್): ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳನನ್ನು ಬಿಹಾರದ ದರ್ಬಾಂಗ ಜಿಲ್ಲೆಗೆ ಮತ್ತು ಆಂಧ್ರದಲ್ಲಿ ಫೆ.21ರಂದು ನಡೆದ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಭಟ್ಕಳ್ನ ಸಹಾಯಕ ಅಸಾದುಲ್ಲಾ ಅಖ್ತರ್ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶನಿವಾರ ಹೈದರಾಬಾದ್ಗೆ ಕರೆ ತಂದಿತು.
ಭಟ್ಕಳ ನೀಡಿದ ಮಾಹಿತಿಯ ಮೇಲೆ ದರ್ಬಾಂಗದ ವಿವಿಧೆಡೆ ಎನ್ಐಎ ತಂಡ ಕಾರ್ಯಾಚರಣೆ ನಡೆಸಿ ಇತರೆ ಶಂಕಿತ ಉಗ್ರರಿಗಾಗಿ ಶೋಧ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ‘ಎನ್ಐಎ ಅಧಿಕಾರಿಗಳು ಭಟ್ಕಳನನ್ನು ಬಿಹಾರಕ್ಕೆ ಕರೆತಂದು, ಆತ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದಭರ್ದಲ್ಲಿ ವಾಸವಾಗಿದ್ದ ಎನ್ನಲಾದ ಒಟ್ಟು ಆರು ಸ್ಥಳಗಳಿಗೆ ಭೇಟಿ ನೀಡಿತು’ ಎಂದು ಅವರು ಹೇಳಿದ್ದಾರೆ.
‘ಎನ್ಐಎ ಭಟ್ಕಳನನ್ನು ದರ್ಬಾಂಗ ಸಮೀಪದ ಸಮಷ್ಟಿಪುರ ಮತ್ತು ಮಧುಬನಿ ಜಿಲ್ಲೆಗಳಿಗೂ ಕರೆದುಕೊಂಡು ಹೋಗಿ ಇಂಡಿಯನ್ ಮುಜಾಹಿದೀನ್ಗೆ ಸೇರಿದ ಉಗ್ರರ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕಿತು’ ಎಂದು ತಿಳಿಸಿದ್ದಾರೆ. ‘ದರ್ಬಾಂಗ, ಮಧುಬನಿ ಮತ್ತು ಸಮಷ್ಟಿಪುರ ಜಿಲ್ಲೆಗಳೊಂದಿಗೆ ತನಗಿರುವ ಸಂಬಂಧಗಳ ಬಗ್ಗೆ ಭಟ್ಕಳ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ’ ಎಂದು ಅವರು ನುಡಿದಿದ್ದಾರೆ.
ತಪ್ಪೊಪ್ಪಿಗೆ: ಈ ಮಧ್ಯೆ ರಾಷ್ಟ್ರೀಯ ತನಿಖಾ ದಳ ಫೆ.21ರಂದು ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಶಂಕಿತ ಉಗ್ರ, ಭಟ್ಕಳನ ಸಹಾಯಕ ಅಸಾದುಲ್ಲಾ ಅಖ್ತರ್ನನ್ನ ‘ಸಂಚಾರಿ ವಾರಂಟ್’ ಮೇರೆಗೆ ಶನಿವಾರ ಹೈದರಾಬಾದ್ಗೆ ಕರೆತಂದಿತು. ಕೆಲಕಾಲ ವಾಸವಿದ್ದು ಬಾಂಬ್ ತಯಾರಿಸಿದ್ದ ಎನ್ನಲಾದ ಬಹಾದ್ದೂರಪುರದ ಅಖ್ತರ್ ಅಲಿಯಾಸ್ ಹದ್ದಿಯನ್ನು ಕರೆದುಕೊಂಡು ಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.