ಅಮರಾವತಿ: ವೈಎಸ್ಆರ್ ಕಾಂಗ್ರೆಸ್ನ ಸಂಸದೆ ಬುಟ್ಟಾ ರೇಣುಕಾ ಅವರು ಮಂಗಳವಾರ ಆಂಧ್ರಪ್ರದೇಶದ ಆಡಳಿತಾರೂಢ ತೆಲುಗುದೇಶಂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕರ್ನೂಲ್ನ ಸಂಸದೆ ಹಾಗೂ ಅವರು ಬೆಂಬಲಿಗರನ್ನು ಟಿಡಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು. ವೈಎಸ್ಆರ್ಸಿಯಿಂದ ಟಿಡಿಪಿಗೆ ಸೇರ್ಪಡೆಯಾಗುತ್ತಿರುವವರಲ್ಲಿ ರೇಣುಕಾ ಎರಡನೇ ಸಂಸದರು. ಈ ಹಿಂದೆ ನಂದ್ಯಾಲ್ ಕ್ಷೇತ್ರದ ವೈಎಸ್ಆರ್ ಪಕ್ಷದ ಸಂಸದ ಎಸ್.ಪಿ.ವೈ. ರೆಡ್ಡಿ ಕೂಡ ಟಿಡಿಪಿ ಸೇರಿದ್ದರು.
ಪಕ್ಷದ ಸಂಸದೆಗೆ ಆಡಳಿತ ಪಕ್ಷ ಹಣದ ಆಮಿಷ ಒಡ್ಡಿದೆ ಎಂದು ವೈಎಸ್ಆರ್ಸಿ ಆರೋಪಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ಆರ್ಸಿಯಿಂದ 8 ಸಂಸದರು ಗೆದ್ದಿದ್ದು, ಇಬ್ಬರು ಪಕ್ಷಾಂತರ ಮಾಡಿದ್ದರಿಂದ ಪಕ್ಷದ ಸಂಸದರ ಸಂಖ್ಯೆ ಆರಕ್ಕಿಳಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.