ADVERTISEMENT

ಬೇಡಿ ಪ್ರಕರಣ: ಅನಿಲ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್):  ಕಿರಣ್ ಬೇಡಿ ಅವರ ಸರ್ಕಾರೇತರ ಸಂಸ್ಥೆ ಇಂಡಿಯಾ ವಿಷನ್ ಫೌಂಡೇಷನ್ (ಐವಿಎಫ್)ನ ಟ್ರಾವೆಲ್ ಏಜೆಂಟ್ ಅನಿಲ್ ಬಲ್ ರಾಜೀನಾಮೆ ನೀಡಿದ್ದಾರೆ.

ಕಿರಣ್ ಬೇಡಿ ಅವರು ಹೆಚ್ಚುವರಿ ಪ್ರಯಾಣ ದರ ಪಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ತಮಗೆ ಅವಮಾನವಾಗಿದೆ ಎಂದು ಅನಿಲ್ ಬಲ್ ಹೇಳಿದ್ದಾರೆ. ಬಲ್, ಪ್ಲೇವೆಲ್ ಟ್ರಾವೆಲ್‌ನ ಮಾಲಿಕರು ಹಾಗೂ ಐವಿಎಫ್‌ನ ಟ್ರಸ್ಟಿಯೂ ಆಗಿದ್ದರು.

ವಿಮಾನ ಪ್ರಯಾಣ ದರದಲ್ಲಿ ತಾವು ಉಳಿಸಿದ ಹಣದಿಂದ ಒಂದು ನಯಾಪೈಸೆಯನ್ನೂ ತಾವು ಬಳಸಿಕೊಂಡಿಲ್ಲ ಎಂದು ಈಗಾಗಲೇ ಬೇಡಿ ಸ್ಪಷ್ಟೀಕರಣ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.