<p><strong>ನವದೆಹಲಿ: </strong>‘ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ, ಭಾರತದ ಒಳಗೆ ಸ್ವಾತಂತ್ರ್ಯವನ್ನು ಕೇಳುತ್ತಿದ್ದೇನೆ’.</p><p>ಇದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ, ರಾತ್ರಿ ಜೆಎನ್ಯು ಕ್ಯಾಂಪಸ್ನಲ್ಲಿ ಮಾಡಿದ ಭಾಷಣದ ತುಣುಕು.<br/> <br/> ‘ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಾಕಷ್ಟು ಭಿನ್ನಾಭಿಪ್ರಾಯವಿರುವುದು ನಿಜ. ಆದರೆ, ನಾನು ಅವರು ಮಾಡಿದ ಟ್ವೀಟ್ ‘ಸತ್ಯಮೇವ ಜಯತೆ’ಯನ್ನು ಗೌರವಿಸುತ್ತೇನೆ. ಯಾಕೆಂದರೆ ಈ ಪದಗಳು ನಮ್ಮ ದೇಶದ ಸಂವಿಧಾನದಲ್ಲಿವೆ’. ಭಾರತದ ಸಂವಿಧಾನ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ’ ಎಂದರು.<br/> <br/> ‘ವಿದ್ಯಾರ್ಥಿಗಳಿಗೆ ದೇಶದೊಳಗೆ ಸ್ವಾತಂತ್ರ್ಯ ಬೇಕು. ಖಂಡಿತವಾಗಿಯೂ ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ. ಭಾರತದೊಳಗೆ ಸ್ವಾತಂತ್ರ್ಯ ಬೇಕು ಎಂದು ಕೇಳುತ್ತಿದ್ದೇನೆ’ ಎಂದರು.<br/> <br/> ಎಬಿವಿಪಿಯನ್ನು ಖಂಡಿತ ಶತ್ರುವಾಗಿ ನೋಡುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇನೆ. ಈ ವ್ಯವಸ್ಥೆಯಲ್ಲಿ ಅವರನ್ನು ವಿರೋಧ ಪಕ್ಷದ ರೀತಿಯಲ್ಲಿ ನೋಡಲು ಬಯಸುತ್ತೇನೆ ಎಂದರು.<br/> <br/> ದೆಹಲಿ ಹೈಕೋರ್ಟ್ ಗುರುವಾರ ಕನ್ಹಯ್ಯಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.</p></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.