ADVERTISEMENT

ಭಾರತ ಸ್ವಾಭಿಮಾನ ಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಝಾನ್ಸಿ (ಉತ್ತರ ಪ್ರದೇಶ): ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಜನಜಾಗೃತಿ ಮೂಡಿಸಲು  ಬಾಬಾ ರಾಮ್‌ದೇವ್ ಮಂಗಳವಾರ ಒಂದು ಲಕ್ಷ ಕಿ.ಮೀ ಉದ್ದದ ಭಾರತ ಸ್ವಾಭಿಮಾನ ಯಾತ್ರೆಯನ್ನು ಇಲ್ಲಿಂದ ಆರಂಭಿಸಿದರು.

`ನನ್ನ ಯಾತ್ರೆ ಮಹಾಸಂಗ್ರಾಮ- 2012 ದೇಶದಾದ್ಯಂತ ಜನರನ್ನು ಎಚ್ಚರಿಸಲಿದೆ. ವೀರರಾಣಿ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ನೆಲದಿಂದ ಆರಂಭವಾದ ಈ ಯಾತ್ರೆ ಒಂದು ದಿನ ಸಂಸತ್ತನ್ನು ತಲುಪಲಿದೆ~ ಎಂದು ರಾಮ್‌ದೇವ್ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.