ವಡೋದರಾ (ಏಜೆನ್ಸೀಸ್): ‘ಮಣಿ ದಾ’ ಎಂದೇ ಹೆಸರಾಗಿದ್ದ ಹಿರಿಯ ಚಿತ್ರಕಲಾ ಕಲಾವಿದ ಕೆ.ಜಿ. ಸುಬ್ರಹ್ಮಣ್ಯನ್ (92) ಬುಧವಾರ ನಿಧನರಾದರು.
ಸೊಂಟದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸುಬ್ರಹ್ಮಣ್ಯನ್ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಕೆಲ ವಾರಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಬುಧವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದರು.
ಕೇರಳ ಮೂಲದ ಸುಬ್ರಹ್ಮಣ್ಯನ್ ಅವರು ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಪದ್ಮಶ್ರೀ ಪುರಸ್ಕಾರ ಸೇರಿದಂತೆ ಹಲವು ಗೌರವಗಳು ಸುಬ್ರಹ್ಮಣ್ಯನ್ ಅವರನ್ನು ಅರಿಸಿಬಂದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.