ADVERTISEMENT

ಮಾಜಿ ಸಚಿವೆಗೆ ಜೈಲಿನಲ್ಲಿ ಗಣ್ಯರ ಆತಿಥ್ಯ: ವಿಚಾರಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಚಂಡೀಗಡ (ಐಎಎನ್‌ಎಸ್): ಪಂಜಾಬ್‌ನ ಮಾಜಿ ಸಚಿವೆ ಜಾಗಿರ್ ಕೌರ್ ಅವರಿಗೆ ಜೈಲಿನಲ್ಲಿ ಗಣ್ಯರ ಆತಿಥ್ಯ ನೀಡಿರುವ ಬಗ್ಗೆ ವಿಚಾರಣೆ ನಡೆಸುವಂತೆ ಕಾರಾಗೃಹ ವಿಭಾಗದ ಡಿಜಿಪಿ ಮಂಗಳವಾರ ಆದೇಶಿಸಿದ್ದಾರೆ.

`ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವರಿಗೆ ವಿಶೇಷ ಆತಿಥ್ಯ ನೀಡಿರುವ ಬಗ್ಗೆ ವಿವರಣೆ ನೀಡುವಂತೆ  ಕಪುರ್ತಲಾ ಜೈಲು ಅಧಿಕಾರಿಗೆ ಸೂಚನೆ ನೀಡಲಾಗಿದೆ ಮತ್ತು ಈ ಪ್ರಕರಣ ಕುರಿತು ವಿಚಾರಣೆ ನಡೆಸಲು ಹಿರಿಯ ಅಧಿಕಾರಿಯೊಬ್ಬರನ್ನು ಅಲ್ಲಿಗೆ ಕಳುಹಿಸಲಾಗಿದೆ~ ಎಂದು ಡಿಜಿಪಿ ಶಶಿಕಾಂತ್ ತಿಳಿಸಿದ್ದಾರೆ.

ಜಾಗಿರ್ ಕೌರ್ ಅವರ ಮಗಳು ಹರ್‌ಪ್ರೀತ್ ಕೌರ್ (19) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲಾದ ಸಿಬಿಐ ವಿಶೇಷ ನ್ಯಾಯಾಲಯವು ಜಾಗಿರ್ ಕೌರ್ ಅವರಿಗೆ  ಶುಕ್ರವಾರ ಐದು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಜಾಗಿರ್ ಕೌರ್ ಅವರ ವಿರುದ್ಧ ಕೊಲೆ ಸೇರಿದಂತೆ ಮಗಳಿಗೆ ಬಲವಂತದ ಗರ್ಭಪಾತ, ಕಾನೂನು ಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದು, ಅಪಹರಣದಂತಹ ಗಂಭೀರ ಆಪಾದನೆಗಳು ಇದ್ದವು.  ನ್ಯಾಯಾಲಯವು ಅವರನ್ನು ಕೊಲೆ ಆರೋಪದಿಂದ ಮುಕ್ತ ಮಾಡಿದೆ.

ADVERTISEMENT

ಶಿಕ್ಷೆಗೆ ಗುರಿಯಾದ ಜಾಗಿರ್ ಕೌರ್, ಗ್ರಾಮೀಣ ನೀರು ಪೂರೈಕೆ ಮತ್ತು ಒಳಚರಂಡಿ, ರಕ್ಷಣಾ ಸಿಬ್ಬಂದಿ ಕಲ್ಯಾಣ ಇಲಾಖೆಯ ಸಂಪುಟ ದರ್ಜೆ  ಸಚಿವ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದರು. ಇವರು ಬದಾಲ್ ಅವರ ಸಂಪುಟದಲ್ಲಿದ್ದ ಏಕೈಕ ಮಹಿಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.