ADVERTISEMENT

ಮೋದಿ: ಮತ್ತೆ 1ದಿನ ಉಪವಾಸ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ದ್ವಾರಕಾ (ಗುಜರಾತ) (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಜಾಮನಗರ ಜಿಲ್ಲೆ ದ್ವಾರಕಾದಲ್ಲಿ ತಮ್ಮ ಎರಡನೇ ಹಂತದ ಒಂದು ದಿನದ ಸದ್ಭಾವನಾ ಉಪವಾಸ ಸತ್ಯಾಗ್ರಹ ನಡೆಸಿದರು.

ಇದಕ್ಕೆ ಪರ್ಯಾಯವಾಗಿ ಜಾಮನಗರದ ಕಾಂಗ್ರೆಸ್ ಸಂಸದ ವಿಕ್ರಂ ಮದಮ್ ಸ್ಥಳೀಯ ಶಾಸಕರೊಂದಿಗೆ ಮೋದಿ ಉಪವಾಸ ಸ್ಥಳದಿಂದ ಮೂರು ಕಿಮೀ ದೂರದ ಸ್ಥಳದಲ್ಲಿ 1 ದಿನದ ಉಪವಾಸ ನಡೆಸಿದರು.

ಬೆಳಿಗ್ಗೆ ಇಲ್ಲಿಗೆ ಆಗಮಿಸಿದ ಮೋದಿ, ವಾರ್ತಾ ಇಲಾಖೆ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ `ಯಾವುದೇ ಲಾಭಕ್ಕಾಗಿ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿಲ್ಲ. ಗುಜರಾತ್ ರಾಜ್ಯದ ಹೆಸರು ಕೆಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ.~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.