ಪಟ್ನಾ: ಅಯೋಧ್ಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರಾಮಮಂದಿರವು ಬರುವ ದೀಪಾವಳಿ ಒಳಗೆ ಪೂರ್ತಿಗೊಳಿಸಲಾಗುವುದು’ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಭಾನುವಾರ ಹೇಳಿದರು.
‘ಇದರ ಆರಂಭ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಈ ಮಂದಿರದ ಸ್ಥಾಪನೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗುವುದು’ ಎಂದ ಅವರು ಈ ಬಗ್ಗೆ ಹೆಚ್ಚಿಗೆ ಏನೂ ವಿವರಿಸಲಿಲ್ಲ.
ವಿರಾಟ್ ಹಿಂದೂಸ್ತಾನ್ ಸಂಗಮ್ನ ಬಿಹಾರದ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸೀತೆಯ ಜನ್ಮಸ್ಥಳ ಎನ್ನಲಾಗುವ ಉತ್ತರ ಬಿಹಾರದ ಸೀತಾಮಡಿಯಲ್ಲಿ ಸೀತೆಯ ದೇವಾಲಯವನ್ನೂ ಸ್ಥಾಪಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.