ADVERTISEMENT

’ರಾಮ್‌ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ’

ಪಿಟಿಐ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
’ರಾಮ್‌ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ’
’ರಾಮ್‌ ರಹೀಂಗೆ ವಿಶೇಷ ಸೌಲಭ್ಯ ನೀಡಿಲ್ಲ’   

ಚಂಡೀಗಡ: ‘ಅತ್ಯಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಒದಗಿಸಿಲ್ಲ’ ಎಂದು ಹರಿಯಾಣ ಡಿಜಿಪಿ (ಕಾರಾಗೃಹ) ಕೆ.ಪಿ.ಸಿಂಗ್‌ ಹೇಳಿದ್ದಾರೆ.

‘ಗುರ್ಮೀತ್‌ನನ್ನು ಇರಿಸಲಾಗಿರುವ ರೋಹ್ಟಕ್‌ನ ಸುನರಿಯಾ ಜೈಲಿಗೆ ನಮ್ಮ ಅಧಿಕಾರಿಗಳು ಪ್ರತಿ ವಾರ ಡಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಆಗ ಅಂತಹ ವಿಶೇಷ ಸೌಲಭ್ಯದ ಯಾವ ಅಂಶವೂ ಕಂಡುಬಂದಿಲ್ಲ. ಹೀಗಾಗಿ ಈ ಕುರಿತ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಅವರು ಹೇಳಿದ್ದಾರೆ.

ಜೈಲಿನಿಂದ ಹೊರಬಂದಿರುವ ಕೈದಿಯೊಬ್ಬ ಇಂತಹ ಆರೋಪಗಳನ್ನು ಮಾಡಿರುವುದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.