ADVERTISEMENT

ರಾವ್‌, ಸಚಿನ್‌ಗೆ ‘ಭಾರತ ರತ್ನ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2014, 19:30 IST
Last Updated 4 ಫೆಬ್ರುವರಿ 2014, 19:30 IST
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ, ಕನ್ನಡಿಗ ಸಿಎನ್‌ಆರ್‌ ರಾವ್‌ ಮತ್ತು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ‘ಭಾರತ ರತ್ನ’ ಪುರಸ್ಕಾರ ಸ್ವೀಕರಿಸಿದರು 	– ಎಎಫ್‌ಪಿ ಚಿತ್ರ
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ, ಕನ್ನಡಿಗ ಸಿಎನ್‌ಆರ್‌ ರಾವ್‌ ಮತ್ತು ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ‘ಭಾರತ ರತ್ನ’ ಪುರಸ್ಕಾರ ಸ್ವೀಕರಿಸಿದರು – ಎಎಫ್‌ಪಿ ಚಿತ್ರ   

ನವದೆಹಲಿ (ಪಿಟಿಐ): ಖ್ಯಾತ ವಿಜ್ಞಾನಿ, ಕರ್ನಾಟಕದ ಪ್ರೊ.ಸಿ.ಎನ್‌.ಆರ್‌ ರಾವ್‌  ಹಾಗೂ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮಂಗಳ­ವಾರ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಕೇವಲ ಆರು ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಪ್ರಣವ್‌ ಮುಖರ್ಜಿ ಅವರು ಈ ಇಬ್ಬರು ಖ್ಯಾತ­ನಾಮರಿಗೆ ‘ಭಾರತ ರತ್ನ’ ಪುರಸ್ಕಾರ­ವನ್ನು ಪ್ರದಾನ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಕಳೆದ ನವೆಂಬರ್‌ 16ರಂದು ನಿವೃತ್ತ­ರಾ­ಗಿದ್ದ 40 ವರ್ಷದ ಸಚಿನ್‌ ತೆಂಡೂಲ್ಕರ್‌ ಅವರು ಈ ಗೌರವಕ್ಕೆ ಪಾತ್ರರಾಗಿರುವ ಏಕೈಕ ಕ್ರೀಡಾಪಟು­ವಾಗಿದ್ದಾರೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ‘ಭಾರತ ರತ್ನ’ ಪ್ರದಾನ ಸಮಾರಂಭದಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಅವರ ಪತ್ನಿ ಅಂಜಲಿ  ಹಾಗೂ ಮಗಳು ಸಾರಾ ಪಾಲ್ಗೊಂಡಿದ್ದರು  –ಪಿಟಿಐ ಚಿತ್ರ

ಕಪ್ಪು ಬಣ್ಣದ ಸೂಟ್‌ ಧರಿಸಿದ್ದ ರಾಜ್ಯ­ಸಭಾ ಸದಸ್ಯರೂ ಆಗಿರುವ ತೆಂಡೂಲ್ಕರ್‌, ಪ್ರಧಾನಿ ಮನ­ಮೋಹನ್‌ ಸಿಂಗ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ಗಣ್ಯರ ಬಳಿಗೆ ತೆರಳಿ ಕುಶಲೋಪರಿ ವಿಚಾರಿಸಿದರು.

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ಕೇಂದ್ರ ಸಚಿವರು, ಸಚಿನ್‌ ಪತ್ನಿ ಅಂಜಲಿ ಪುತ್ರಿ ಸಾರಾ ಸೇರಿದಂತೆ ಹಲವರು ಸಮಾ­ರಂಭದಲ್ಲಿ ಹಾಜರಿದ್ದರು.

ಸಮಾರಂಭದ ಬಳಿಕ ಸುದ್ದಿಗಾರ­ರೊಂದಿಗೆ ಮಾತನಾಡಿದ ಪ್ರೊ.ರಾವ್‌, ‘ಇದು ಶ್ರೇಷ್ಠ ಗೌರವ. ಎಲ್ಲಕ್ಕಿಂತಲೂ ಮಿಗಿಲಾಗಿದ್ದು. ಭಾರತ ನನ್ನನ್ನು ಗೌರವಿ­ಸಿರುವುದನ್ನು ಯಾವುದಕ್ಕೂ ಹೋಲಿಸ­ಲಾಗದು’ ಎಂದು ಹೇಳಿದರು.

ADVERTISEMENT


ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿ­ಸಲು ನಿರಾಕರಿಸಿದ ಸಚಿನ್‌ ತೆಂಡೂ­ಲ್ಕರ್‌, ‘ಭಾರತದ ಪರ ಬ್ಯಾಟಿಂಗ್‌ ಮಾಡುವುದನ್ನು ಮುಂದು­ವರಿ­ಸು­ತ್ತೇನೆ. ನಾನು ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ನಿಲ್ಲಿಸಿ­ದ್ದರೂ, ದೇಶದ ಪರ ಕೆಲಸ ಮಾಡಿ ಜನರ ಮೊಗದಲ್ಲಿ ನಗು­ಮೂಡಿಸಲು ಯತ್ನಿಸುತ್ತೇನೆ’ ಎಂದಷ್ಟೇ ಹೇಳಿದರು.
ಪ್ರಯಾಸಪಟ್ಟ ಸಿಬ್ಬಂದಿ:   ಸಮಾರಂಭ­­ದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ರಾಷ್ಟ್ರಪತಿ ಭವನದ ಸಿಬ್ಬಂದಿ ಪ್ರಯಾಸ ಪಟ್ಟರು.

ಸೇರಿದವರಲ್ಲಿ ಹೆಚ್ಚಿನವರು ಸಚಿನ್‌ ಅವರಿಗೆ ಅಭಿನಂದನೆ ಸಲ್ಲಿಸಲು ಮತ್ತು ಗೃಹ ಸಚಿವಾಲಯ ಹಂಚಿದ್ದ ಕಿರು­ಹೊತ್ತಗೆಯಲ್ಲಿ ಹಸ್ತಾಕ್ಷರ ಪಡೆ­ಯಲು ಬಯಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.