ADVERTISEMENT

ರಾಹುಲ್ ಸಭೆ: ಪಿಸ್ತೂಲ್ ಇದ್ದ ಯುವಕನ ವಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಅಮೇಥಿ (ಪಿಟಿಐ): ಸಂಸದ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದಾಗ ಪಿಸ್ತೂಲಿನೊಂದಿಗೆ ಒಳ ಪ್ರವೇಶಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

ಪರವಾನಗಿ ಇರುವ ಪಿಸ್ತೂಲು ಹೊಂದಿದ್ದ ಪ್ರದೀಪ್‌ಕುಮಾರ್ ಸೋನಿ ಪೊಲೀಸರ ವಶವಾಗಿರುವ ಆರೋಪಿ. ತನ್ನ ತಂದೆ ಮತ್ತು ಸಹೋದರನನ್ನು ಮೂರು  ತಿಂಗಳ ಹಿಂದೆ ಕೊಲೆ ಮಾಡಿದ್ದು, ಈ ಸಂಬಂಧ ರಾಹುಲ್‌ಗೆ ಅರ್ಜಿ ಸಲ್ಲಿಸಲು ಬಂದಿದ್ದಾಗಿ ಯುವಕ ತನಿಖೆ ವೇಳೆ ತಿಳಿಸಿದ್ದಾನೆ. ಕೆಲವರು ಪದೇ ಪದೇ ಜೀವ ಬೆದರಿಕೆ ಹಾಕುತ್ತಿದ್ದರು. ಆತ್ಮರಕ್ಷಣೆಗೆ ಪಿಸ್ತೂಲು ಇಟ್ಟುಕೊಂಡ್ದ್ದಿದೆನೆಂದೂ ತಿಳಿಸಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.