ADVERTISEMENT

ವಿಚಾರಣೆಗೆ ಸುಪ್ರೀಂ ನಕಾರ

ಸರ್ಕಾರಿ ಜಾಹೀರಾತು ವಿರುದ್ಧ ಅರ್ಜಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:12 IST
Last Updated 3 ಮಾರ್ಚ್ 2014, 10:12 IST

ನವದೆಹಲಿ (ಪಿಟಿಐ): ತಮ್ಮ ಸಾಧನೆಗಳನ್ನು ‘ಬಿಂಬಿಸಿ’ಕೊಳ್ಳಲು ಸರ್ಕಾರ ನೀಡುವ ಜಾಹೀರಾತುಗಳ ನಿಯಂತ್ರಣಕ್ಕೆ ಸಲಹಾಸೂತ್ರಗಳನ್ನು ರಚಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌  ಸೋಮವಾರ ನಿರಾಕರಿಸಿದೆ.

‘ಶೀಘ್ರದಲ್ಲೇ ಚುನಾವಣೆ ಇದೆ. ಇಂತಹ ಅರ್ಜಿ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ’ ಎಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ ಪಿ. ಸದಾಶಿವಂ ಅವರಿದ್ದ ಪೀಠ, ‘ಸಾರ್ವತ್ರಿಕ ಚುನಾವಣೆಯ ನಂತರ ಮತ್ತೆ ನ್ಯಾಯಲಯದ ಮೊರೆ ಹೋಗಬಹುದು’ ಎಂದು ಅರ್ಜಿದಾರನಿಗೆ ಹೇಳಿತು.

ಆಡಳಿತಾರೂಢ ಪಕ್ಷ ಹಾಗೂ ಅದರ ನಾಯಕರ ಸಾಧನೆಗಳನ್ನು ‘ಬಿಂಬಿಸಲು’ ಸರ್ಕಾರಗಳು ಜಾಹೀರಾತಿಗಾಗಿ ಸಾರ್ವಜನಿಕ ಬೊಕ್ಕಸದ ಕೋಟಿ–ಕೋಟಿ ಹಣ ವ್ಯಯಿಸುತ್ತಿವೆ  ಎಂದು ಆರೋಪಿಸಿ ಕೊಚೌಸ್ಪೆಹ್ ಚಿಟ್ಟಿಲಪಿಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ADVERTISEMENT

‘ಅಂತಿಮ ಗಳಿಗೆ’ಯಲ್ಲಿ ನ್ಯಾಯಾಲಯದ ಮೊರೆ ಹೋಗಲು ಕಾರಣವೇನು ಎಂದು ಅರ್ಜಿದಾರನಿಗೆ ಪ್ರಶ್ನಿಸಿದ ಪೀಠ, ‘ನೀವು ಹೇಳುವುದು ಸರಿ. ಆದರೆ ವಿಚಾರಣೆಗೆ ಇದು ಸೂಕ್ತ ಸಮಯವಲ್ಲ. ಈ ಹಂತದಲ್ಲಿ ನಿಮ್ಮ ಅರ್ಜಿಯನ್ನು ವಿಚಾರಣೆ ನಡೆಸಲಾಗದು’ ಎಂದೂ ಪೀಠ ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.