ADVERTISEMENT

ವಿದ್ಯಾರ್ಥಿನಿಗೆ ಅವಮಾನ: ಶಿಕ್ಷಕಿಯ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಕೋಲ್ಕೊತ್ತ (ಪಿಟಿಐ): ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರ ಬಿಚ್ಚಿಸಿದ ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ಗೋಪಾಲನಗರ ಗಿರಿಬಾಲ ಉಚ್ಚ ಬಾಲಿಕಾ ವಿದ್ಯಾಲಯದ  ಶಿಕ್ಷಕಿಯೊಬ್ಬರನ್ನು ಶನಿವಾರ ಬಂಧಿಸಲಾಗಿದೆ. 

ಈ ವಿದ್ಯಾರ್ಥಿನಿ ಐವತ್ತು ರೂಪಾಯಿ ಕದ್ದಿದ್ದಾಳೆ ಎಂದು ಇನ್ನೊಬ್ಬ ವಿದ್ಯಾರ್ಥಿನಿ ದೂರು ನೀಡಿದ ಹಿನ್ನೆಲೆಯಲ್ಲಿ ಗೋಪಾಲನಗರ ಗಿರಿಬಾಲ ಉಚ್ಚ ಬಾಲಿಕಾ ವಿದ್ಯಾಲಯದ ಶಿಕ್ಷಕಿ ಈ ಕೃತ್ಯಕ್ಕೆ ಮುಂದಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದ ಇಂಥದ್ದೇ ಇನ್ನೊಂದು ಘಟನೆಯಲ್ಲಿ ದೇರೊಕೃಷ್ಣ ಬನಿತೀರ್ಥ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿ ನೆಲದ ಮೇಲೆ ಚೆಲ್ಲಿದ ನೀರನ್ನು ಒರೆಸುವಂತೆ ಶಾಲೆಯ ಪ್ರಾಂಶುಪಾಲರು ಆದೇಶಿಸಿದ್ದರು ಎನ್ನಲಾಗಿದೆ.

ಎರಡೂ ಘಟನೆಗಳ ತನಿಖೆಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.