ADVERTISEMENT

ಸಂಸದೀಯ ಸಮಿತಿ ಮುಂದೆ ಆರ್‌ಬಿಐ ಗವರ್ನರ್‌: ಬ್ಯಾಂಕಿಗ್‌ ವ್ಯವಸ್ಥೆ ಬಲಪಡಿಸಿಲು ಕ್ರಮದ ಭರವಸೆ

ಪಿಟಿಐ
Published 12 ಜೂನ್ 2018, 10:56 IST
Last Updated 12 ಜೂನ್ 2018, 10:56 IST
ಸಂಸದೀಯ ಸಮಿತಿ ಮುಂದೆ ಆರ್‌ಬಿಐ ಗವರ್ನರ್‌: ಬ್ಯಾಂಕಿಗ್‌ ವ್ಯವಸ್ಥೆ ಬಲಪಡಿಸಿಲು ಕ್ರಮದ ಭರವಸೆ
ಸಂಸದೀಯ ಸಮಿತಿ ಮುಂದೆ ಆರ್‌ಬಿಐ ಗವರ್ನರ್‌: ಬ್ಯಾಂಕಿಗ್‌ ವ್ಯವಸ್ಥೆ ಬಲಪಡಿಸಿಲು ಕ್ರಮದ ಭರವಸೆ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ಮಂಗಳವಾರ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದು, ವಸೂಲಾಗದ ಸಾಲ, ಬ್ಯಾಂಕ್‌ಗಳಿಗೆ ವಂಚನೆ, ನಗದು ಕೊರತೆಯಂತಹ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಎದುರಿಸಿದ್ದಾರೆ.

ಬ್ಯಾಂಕಿಂಗ್‌ ವಲಯದ ವಸೂಲಿಯಾಗದ ಸಾಲದ ಪ್ರಮಾಣ(ಎನ್‌ಪಿಎ) ಬಿಕ್ಕಟ್ಟನ್ನು ಬಗೆಹರಿಸುವ ವಿಶ್ವಾಸವನ್ನು ಊರ್ಜಿತ್‌ ಪಟೇಲ್‌ ಅವರು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.

ಎಟಿಎಂಗಳಲ್ಲಿ ನಗದು ಕೊರತೆ ಉಂಟಾದ ಬಗ್ಗೆ ಕಾರಣಗಳು ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗುತ್ತಿರುವ ವಂಚನೆಗಳನ್ನು ತಡೆಯುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಮತ್ತು ಸಮಿತಿ ಕೆಲ ಸದಸ್ಯರು ಕೇಳಿದ್ದರು. 

ADVERTISEMENT

ಎನ್‌ಪಿಎಗೆ ಸಂಬಂಧಿಸಿದಂತೆ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬಲಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಿಕ್ಕಟ್ಟಿನ ನಿವಾರಣೆಗೆ ನಾವು ಕಾರ್ಯೋನ್ಮುಖರಾಗಿದ್ದೇವೆ ಮತ್ತು ಭರವಸೆ ಹೊಂದಿದ್ದೇವೆ ಎಂದು ಊರ್ಜಿತ್ ಪಟೇಲ್‌ ಸಮಿತಿ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿವಾಳಿ ಸಂಹಿತೆಯ (ಐಬಿಸಿ) ಅನುಷ್ಠಾನಗೊಳಿಸಿದ ನಂತರ ಎನ್‌ಪಿಎಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಪಟೇಲ್ ಸಮಿತಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.