ಗೊಂಡಾ: ಉತ್ತರಪ್ರದೇಶದ ಸರಯೂ ನದಿಯ ಸ್ವಚ್ಛತೆಯ ಪರಿಶೀಲನೆಗೆ ತೆರಳಿದ್ದ ಬಾರಾಬಂಕಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್ ಅವರು ನದಿಗೆ ಪ್ಲಾಸ್ಟಿಕ್ ಬಾಟಲಿ ಎಸೆದಿರುವುದು ವಿವಾದ ಸೃಷ್ಟಿಸಿದೆ.
ನದಿಗೆ ಬಾಟಲಿ ಎಸೆದಿರುವ ವಿಡಿಯೊ ವೈರಲ್ ಆಗಿದೆ. ನದಿಯ ಸ್ವಚ್ಛತೆಯ ಪರಿಶೀಲನೆ ನಡೆಸಲು ಹೊರಡುವ ವೇಳೆಯೇ ಪ್ರಿಯಾಂಕಾ ಅವರು ನದಿಗೆ ಬಾಟಲಿ ಎಸೆದಿರುವುದು ಹಲವರ ಟೀಕೆಗೆ ಗುರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.