ADVERTISEMENT

ಹತ್ತು ವರ್ಷಗಳಲ್ಲಿ ಯುಪಿಎ ಮಾಡಿದ್ದು ಸಂಘಟಿತ ಲೂಟಿ: ವಿಜಯ್ ರೂಪಾನಿ ತಿರುಗೇಟು

ಏಜೆನ್ಸೀಸ್
Published 7 ನವೆಂಬರ್ 2017, 16:55 IST
Last Updated 7 ನವೆಂಬರ್ 2017, 16:55 IST
ವಿಜಯ್‌ ರೂಪಾನಿ (ಸಂಗ್ರಹ ಚಿತ್ರ)
ವಿಜಯ್‌ ರೂಪಾನಿ (ಸಂಗ್ರಹ ಚಿತ್ರ)   

ಅಹಮದಾಬಾದ್: ನೋಟು ರದ್ದತಿ ನಿರ್ಧಾರ ಸಂಘಟಿತ ಲೂಟಿ ಎಂಬ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಮನಮೋಹನ್ ಸಿಂಗ್ ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರದ ಪ್ರಧಾನಿಯಾಗಿದ್ದರು’ ಎಂದು ರೂಪಾನಿ ಟೀಕಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರು ಗುಜರಾತ್ ವಿರೋಧಿ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಉದ್ಯಮಿಗಳು ಮತ್ತು ವಹಿವಾಟುದಾರರ ಜತೆ ‘ಆರ್ಥಿಕತೆಯ ಪ್ರಸಕ್ತ ಸ್ಥಿತಿಗತಿ’ ವಿಷಯದ ಬಗ್ಗೆ ಇಲ್ಲಿ ಸಂವಾದ ನಡೆಸಿದ್ದ ಮನಮೋಹನ್ ಸಿಂಗ್ ಅವರು, ನೋಟು ರದ್ದತಿಯ ಯಾವೊಂದು ಉದ್ದೇಶವೂ ಈವರೆಗೆ ಈಡೇರಿಲ್ಲ. ಜಿಎಸ್‌ಟಿಯು ಸಣ್ಣ ಉದ್ದಿಮೆದಾರರಿಗೆ ದುಸ್ವಪ್ನವಾಗಿ ಪರಿಣಮಿಸಿದೆ ಎಂದು ಹೇಳಿದ್ದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ರೂಪಾನಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಸ್ಪೀಕ್‌ಅಪ್‌ಎಂಎಂಎಸ್‌’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳನ್ನು ಪ್ರಕಟಿಸಿರುವ ರೂಪಾನಿ, ಸಿಂಗ್ ಅವರ ಸರ್ಕಾರ ಪಾಕಿಸ್ತಾನದ ‍ಪರ ಧೋರಣೆ ಹೊಂದಿತ್ತು ಎಂದು ಟೀಕಿಸಿದ್ದಾರೆ.

‘10 ವರ್ಷಗಳ ಅಧಿಕಾರಾವಧಿಯಲ್ಲಿ ಯುಪಿಎ ಮಾಡಿದ್ದು ಸಂಘಟಿತ ಲೂಟಿ. ಯುಪಿಎ ಸರ್ಕಾರ ಒಂದು ಕುಟುಂಬದ ಬಗ್ಗೆ ಯೋಚಿಸುವ ಬದಲು ದೇಶದ ಬಗ್ಗೆ ಗಮನಹರಿಸಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು’ ಎಂದು ರೂಪಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.