ADVERTISEMENT

ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:00 IST
Last Updated 15 ಅಕ್ಟೋಬರ್ 2012, 9:00 IST
ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ
ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ   

ಪಣಜಿ /ನವದೆಹಲಿ (ಐಎಎನ್‌ಎಸ್): ಗೋವಾದ ದಾಬೋಲಿಂ ನೌಕಾಪಡೆಯ ವಾಯುನೆಲೆಯ ರನ್‌ವೇಯಲ್ಲಿ ಚೇತಕ್ ಹೆಲಿಕಾಪ್ಟರ್ ಇಳಿಯುವಾಗ ಸಂಭವಿಸಿದ ಅಪಘಾತದಲ್ಲಿ ಮೂವರು ನೌಕಾಪಡೆ ಅಧಿಕಾರಿಗಳು ಮೃತರಾದ ಘಟನೆ ಸೋಮವಾರ ನಡೆದಿದೆ.

ಅಪಘಾತಕ್ಕಿಡಾದ ಹೆಲಿಕಾಪ್ಟರ್ ಮುಂಬೈನಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಇಲ್ಲಿನ ಐಎನ್ ಎಸ್ ವಾಯುನೆಲೆಯಲ್ಲಿ ಇಂಧನ ಮರುಭರ್ತಿಗಾಗಿ ಇಳಿಯುವಾಗ ಹೆಲಿಕಾಪ್ಟರ್‌ ನ ರೋಟರ್ ತುಂಡಾಗಿ ಬೆಂಕಿ ಹೊತ್ತಿಕೊಂಡು ವಿಮಾನ ನೆಲಕ್ಕೆ ಅಪ್ಪಳಿಸಿತು ಎಂದು ನೌಕಾ ಪಡೆಯ ವಕ್ತಾರರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಅಧಿಕಾರಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ವಕ್ತಾರರು ದೃಢಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT