ADVERTISEMENT

ಹೈದರಾಬಾದ್ ಸ್ಫೋಟ: ಕಲಾಪದಲ್ಲಿ ಗದ್ದಲ-ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2013, 11:27 IST
Last Updated 22 ಫೆಬ್ರುವರಿ 2013, 11:27 IST
ಹೈದರಾಬಾದ್ ಸ್ಫೋಟ: ಕಲಾಪದಲ್ಲಿ ಗದ್ದಲ-ಮುಂದೂಡಿಕೆ
ಹೈದರಾಬಾದ್ ಸ್ಫೋಟ: ಕಲಾಪದಲ್ಲಿ ಗದ್ದಲ-ಮುಂದೂಡಿಕೆ   

ನವದೆಹಲಿ (ಪಿಟಿಐ): ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ಪರಿಣಾಮ ಸದನ ಕಲಾಪವನ್ನು ಮುಂದೂಡಲಾಯಿತು.

ಉಭಯ ಸದನಗಳಲ್ಲಿ ಬಿಜೆಪಿ ಸಂಸದರು ಹೈದರಾಬಾದ್ ಅವಳಿ ಬಾಂಬ್ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದರು. ಸರ್ಕಾರ ಸಾರ್ವಜನಿಕರಿಗೆ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಎಲ್‌ಟಿಟಿಇಯ ನಾಯಕ ಪ್ರಭಾಕರನ್ ಮಗನ ಹತ್ಯೆ ಖಂಡಿಸಿ ಪ್ರತಿಭಟನೆಗೆ ಮುಂದಾದರು ಈ ಸಂದರ್ಭದಲ್ಲಿ ಗದ್ದಲ ಉಂಟಾದ್ದರಿಂದ ಕಲಾಪವನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.